Slide
Slide
Slide
previous arrow
next arrow

ಉಸ್ತುವಾರಿ ಸಚಿವ ಮಂಕಾಳ ವೈದ್ಯಗೆ ಮಂಜಗುಣಿ ನಾಗರಿಕರಿಂದ ಸನ್ಮಾನ

300x250 AD

ಅಂಕೋಲಾ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸಿ ಗ್ರಾಮದ ಅಭಿವೃದ್ಧಿಯ ವಿಷಯವಾಗಿ ಮಂಜಗುಣಿ ಗ್ರಾಮದ ಪ್ರಮುಖರು ಸಚಿವರೊಂದಿಗೆ ಚರ್ಚೆ ನಡೆಸಿದರು.

ಪ್ರಮುಖರಾದ ಕೆ.ಡಿ. ನಾಯ್ಕ ಮಾತನಾಡಿ, ಮಂಜಗುಣಿಯ ಒಳ ರಸ್ತೆಯು ಅಭಿವೃದ್ಧಿ ಕಾಣದೇ ಇರುವುದರಿಂದ ಇಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಹೀಗಾಗಿ ತಾವು ಹಾಗೂ ಶಾಸಕ ಸತೀಶ ಸೈಲ್ ಅವರು ಇದನ್ನು ನಿರ್ಮಿಸಿಕೊಡಬೇಕು ಎಂದರು. ಹಾಗೇ ಮನವಿ ಪತ್ರವನ್ನು ಕೂಡ ನೀಡಿದರು. ಮನವಿ ಸ್ವೀಕರಿಸಿದ ಸಚಿವ ಮಂಕಾಳ ವೈದ್ಯ ಮಾತನಾಡಿ, ನಾನು ಹಾಗೂ ಸತೀಶ ಸೈಲ್ ಸೇರಿ ಅಭಿವೃದ್ಧಿಗೆ ಒತ್ತನ್ನು ನೀಡುತ್ತಿದ್ದು, ಹಾಗೇ ಈ ರಸ್ತೆಯ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ಜನರ ಸಮಸ್ಯೆಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.

300x250 AD

ಈ ಸಂದರ್ಭದಲ್ಲಿ ಹೊನ್ನೆಬೈಲ್ ಗ್ರಾ.ಪಂ. ಅಧ್ಯಕ್ಷ ವೆಂಕಟ್ರಮಣ ಕೆ. ನಾಯ್ಕ, ನಿವೃತ್ತ ಪಿಎಸ್‌ಐ ವೆಂಕಣ್ಣ ನಾಯಕ, ಪ್ರಮುಖರಾದ ಮೋಹನ ಡಿ. ನಾಯ್ಕ, ಜಟ್ಟಿ ನಾಯ್ಕ, ನಾಗರಾಜ ಮಂಜಗುಣಿ, ಶ್ರೀಪಾದ ನಾಯ್ಕ ಬೇಳಾ ಇತರರಿದ್ದರು.

Share This
300x250 AD
300x250 AD
300x250 AD
Back to top